ಭಾರತೀಯ ಸೇನಾಪಡೆಳಿಗೆ ತುರ್ತು ಖರೀದಿ ಅಧಿಕಾರವನ್ನು ನೀಡಿದ ಕೇಂದ್ರ ಸರ್ಕಾರ..!!

ಭಾರತ ಪಾಕ್ ಸಂಘರ್ಷದ ನಂತರ ಕೇಂದ್ರ ಸರ್ಕಾರವು ಸುರಕ್ಷತಾ ದೃಷ್ಟಿಯಿಂದ ಭಾರತೀಯ ಮಿಲಿಟರಿಗೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ನೀಡಿದೆ. ಇದರ ಬೆನ್ನಲ್ಲೇ ತಾರಕಕ್ಕೇರಿರುವ ಉಭಯ ರಾಷ್ಟ್ರಗಳ ದಾಳಿಯ ನಡುವೆ ಕೇಂದ್ರ ಸರ್ಕಾರವು ಭಾರತದ ಮೂರೂ ಸಶಸ್ತ್ರ ಪಡೆಗಳಿಗೆ ಮತ್ತಷ್ಟು ಅಧಿಕಾರವನ್ನು ನೀಡಿದ್ದು, ತುರ್ತು ಖರೀದಿಯ ಸಂಪೂರ್ಣ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರವು ತನ್ನ ಮೂರು ಶಸ್ತ್ರ ಪಡೆಗಳಿಗೆ ತುರ್ತು ಖರೀದಿಯ ಅಧಿಕಾರವನ್ನು ನೀಡಿದೆ. ಈ ಮೂಲಕ ಎಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಯುದ್ಧಕ್ಕೆ ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುವ ಕಾರ್ಯವಿಧಾನವನ್ನು ಅನುಸರಿಸಿದ್ದು, ಜಗತ್ತಿಗೆ ಸಂದೇಶವನ್ನೂ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಯುದ್ಧದ ಸಂದರ್ಭದಲ್ಲಿ ಶಸ್ತ್ರ ಪಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಕ್ಷಣಾ ಸಚಿವರ ಅಡಿಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು ಸಶಸ್ತ್ರ ಪಡೆಗಳಿಗೆ ಆರ್ಥಿಕ ಮತ್ತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಿದೆ. ಇದು ಸೇನಾಪಡೆಗಳಿಗೆ ಆರು ತಿಂಗಳವರೆಗೆ ನೇರ ಖರೀದಿಯ ಶಕ್ತಿಯನ್ನು ನೀಡುತ್ತದೆ.

Post a Comment

0 Comments