ಏಪ್ರಿಲ್ 4 ರಿಂದ 6 ತಾರೀಖಿನವರೆಗೆ ಮಂಗಳೂರು- ಮಧೂರು ವಿಶೇಷ ಬಸ್ ವ್ಯವಸ್ಥೆ!!

ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ಬಹು ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾರ್ವಜನಿಕ ಭಕ್ತಾದಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಮಂಗಳೂರು ಕೆ.ಎಸ್.ಆರ್.ಟಿ.ಸಿ ವಿಭಾಗದಿಂದ ಮಂಗಳೂರು- ಮಧೂರು ನಡುವೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಈ ವಿಶೇಷ ಬಸ್ ಸೇವೆಯು ಎಪ್ರಿಲ್ 4 ರಿಂದ 6 ತಾರೀಖಿನವರೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯವಿದೆ. ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಮಧೂರು ಕ್ಷೇತ್ರಕ್ಕೆ ಬೆಳಗ್ಗೆ 10.00 ಗಂಟೆಗೆ ಹಾಗೂ 10:20 ಕ್ಕೆ ಬಸ್ ಹೊರಡಲಿದೆ. ಹಾಗೆಯೇ ಮಧೂರು ಕ್ಷೇತ್ರದಿಂದ ಮಂಗಳೂರಿಗೆ ಮಧ್ಯಾಹ್ನ 1:30 ಹಾಗೂ 1.45ಕ್ಕೆ ಹೊರಡಲಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments