ಏಪ್ರಿಲ್ 19ಕ್ಕೆ ಪ್ರಧಾನಿ ಮೋದಿಯವರಿಂದ 'ಚೆನಾಬ್' ಲೋಕಾರ್ಪಣೆ..!!

ಉಧಂಪುರ್, ಶ್ರೀನಗರ-ಬರ ಮುಲ್ಲಾ ರೈಲು ಸಂಪರ್ಕ ಯೋಜನೆಯ ಅಂತಿಮ ಹಂತವನ್ನು ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 19 ರಂದು ಉದ್ಘಾಟಿಸಲಿದ್ದಾರೆ. ಹೊಸದಾಗಿ ಪೂರ್ಣಗೊಂಡ ಕತ್ರಾ-ಸಂಗಾಲ್ದಾನ್ ಮಾರ್ಗ, ಚೆನಾಬ್ ರೈಲ್ವೇ ಸೇತುವೆಯನ್ನು ಒಳಗೊಂಡಿದೆ. ಇದು ವಿಶ್ವದ ಅತಿ ಎತ್ತರದ ರೈಲ್ವೇ ಕಮಾನು ಸೇತುವೆಯಾಗಿದ್ದು, ಕತ್ರ ಮೂಲಕ ಹೊಸದಿಲ್ಲಿ ಮತ್ತು ಕಾಶ್ಮೀರ ಕಣಿವೆಯ ನಡುವೆ ನೇರ ರೈಲು ಸಂಪರ್ಕ ಒದಗಿಸುತ್ತದೆ.
ಸುಮಾರು 272 ಕಿಲೋಮೀಟರ್ ಉದ್ದದ ಈ ಯು ಎಸ್ ಬಿ ಆರ್ ಎಲ್ ಯೋಜನೆಯಲ್ಲಿ 119 ಕಿಲೋಮೀಟರ್ ಉದ್ದದ ಸುರಂಗ ವ್ಯವಸ್ಥೆ ಇದೆ. ಕಾಶ್ಮೀರಕ್ಕೆ ರೈಲು ಸಂಚಾರ ವ್ಯವಸ್ಥೆ ಪ್ರತಿಯೊಬ್ಬ ಭಾರತೀಯನ ಕನಸ್ಸು ಆಗಿತ್ತು. ಇದೀಗ ಯು ಎಸ್ ಬಿ ಆರ್ ಎಲ್ ವಿಭಾಗ ಸಿದ್ದವಾಗಿದೆ. ಈ ಸಂಪೂರ್ಣ ಪ್ರದೇಶ ಕಾಶ್ಮೀರದ ಧಾರ್ಮಿಕ, ಪ್ರವಾಸೋದ್ಯಮ, ಸಂಪರ್ಕ ಮತ್ತು ಸಾಂಸ್ಕೃತಿಕ ದೃಷ್ಟಿಯಿಂದ ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಸೇತುವೆ ನಿರ್ಮಾಣದಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿದ್ದು ಉದ್ಘಾಟನೆಯ ನಂತರವೂ ಅಲ್ಲಿನ ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ. 

ಉದ್ಘಾಟನಾ ದಿನದಂದು ಭಾರತೀಯ ರೈಲ್ವೆ ಎರಡು ಒಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಒಂದು ಶ್ರೀನಗರದಿಂದ ಮತ್ತು ಇನ್ನೊಂದು ಕತ್ರದಿಂದ ಶ್ರೀನಗರಕ್ಕೆ ಸಂಚರಿಸಲಿದೆ. ಈ ವರ್ಷದ ಆರಂಭದಲ್ಲಿ ಭಾರತೀಯ ರೈಲ್ವೆ ಶ್ರೀ ಮಾತಾ ವೈಷ್ಣೋದೇವಿ ಕತ್ರದಿಂದ ಶ್ರೀ ನಗರದವರೆಗೆ ಪ್ರಾಯೋಕಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಈ ಮಾರ್ಗ ಅಂಜಿಖಾದ್ ಸೇತುವೆ, ಭಾರತದ ಮೊದಲ ಕೇಬಲ್ ಸ್ಟೇಡ್ ರೈಲ್ವೆ ಸೇತುವೆ ಮತ್ತು ಚೆನಾಬ್ ಸೇತುವೆಯಂತಹ ಇಂಜಿನಿಯರಿಂಗ್ ಅದ್ಭುತಗಳನ್ನು ಹಾದು ಹೋಗುತ್ತದೆ.


 

Post a Comment

0 Comments