ಹಾಸನ ಜಿಲ್ಲೆಯ ಕಣ್ಮಣಿಗಳು
ಶ್ರೀಮತಿ ಲೀಲಾವತಿ ಮೇಡಂ ಕಂಡರೆ
ನಮಗೆಲ್ಲ ತುಂಬಾ ಅಕ್ಕರೆ
ಹಾಸನವಾಣಿ ಯ ಸಂಪಾದಕಿ
ಸಾಹಿತಿಗಳ ಪ್ರೋತ್ಸಾಹಿಸೊ ಸಾಧಕಿ
ಶ್ರೀಮತಿ ಸುಶೀಲ ಸೋಮಶೇಖರ್ ಎಂದರೆ
ನಮ್ಮೆಲ್ಲರ ಮಮತೆಯ ಸಿಹಿಸಕ್ಕರೆ
ಅರ್ಥವತ್ತಾದ ಆಧುನಿಕ ವಚನಗಾರ್ತಿ
ಲೇಖಕಿಯರನ್ನೆಲ್ಲ ಇಷ್ಟಪಡುವ ಸ್ನೇಹ ಮೂರ್ತಿ
ಶ್ರೀಮತಿ ಪದ್ಮಾ ಮೂರ್ತಿ ಯವರು
ನಮ್ಮೆಲ್ಲರ ಪ್ರೀತಿ ಪಾತ್ರರು
ಚುಕುಟು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
ಶಿಷ್ಯರನ್ನು ಹೆಮ್ಮೆಯಿಂದ ಹರಸುವವರು
ಶ್ರೀಮತಿ ಶೈಲಜಾ ಹಾಸನರವರು
ಸಾಹಿತ್ಯಸಮ್ಮೇಳನದ ಅಧ್ಯಕ್ಷರಾದವರು
ಇಪ್ಪತ್ತೈದಕ್ಕೂ ಹೆಚ್ಚು ಕೃತಿ ರಚಿಸಿದವರು
ಹಾಸನ ಜಿಲ್ಲಾ ದಸರಾ ಕವಿಗೋಷ್ಠಿ ನಡೆಸುವವರು
ಸಾವಿತ್ರಮ್ಮ ಓಂಕಾರ್ ಅರಸೀಕೆರೆ




0 Comments