ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಂಡ ಭಾರತದ 6 ಸ್ಥಳಗಳು

ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಹರಡಿಕೊಂಡಿರುವ ಚಕ್ರವರ್ತಿ ಅಶೋಕನ ಶಿಲಾ ಶಾಸನಗಳನ್ನೊಳಗೊಂಡ ಸ್ಥಳ ಮತ್ತು ಚೌಸತ್ ಯೋಗಿನಿ ದೇವಾಲಯಗಳಿರುವ ಸ್ಥಳಗಳು ಸೇರಿದಂತೆ ಒಟ್ಟು ಆರು ಸ್ಥಳಗಳು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಭಾರತದ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಈ ಸ್ಥಳಗಳನ್ನು ಮಾರ್ಚ್ ಏಳರನ್ನು ಸಂಭಾವ್ಯ ಪಟ್ಟಿಗೆ ಸೇರಿಸಲಾಗಿದೆ ಎಂದು ಯುನೆಸ್ಕೋ ದಲ್ಲಿನ ಭಾರತದ ಶಾಶ್ವತ ನಿಯೋಗ ತಿಳಿಸಿದ್ದು ಈ ಕುರಿತು ಎಕ್ಸ್ ನಲ್ಲಿ ತಡರಾತ್ರಿ ಹೇಳಿಕೆಯನ್ನು ಪ್ರಕಟಿಸಿದೆ. 
6 ತಾಣಗಳ ಸೇರ್ಪಡೆಯಿಂದ ತಾತ್ಕಾಲಿಕ ಪಟ್ಟಿಯಲ್ಲಿರುವ ಒಟ್ಟು ಭಾರತದ ತಾಣಗಳ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವನ್ನು ಘೋಷಿಸಲು ಈ ಪಟ್ಟಿಯಲ್ಲಿರುವ ತಾಣಗಳನ್ನು ಪರಿಶೀಲನೆ ನಡೆಸುತ್ತದೆ. ತಾತ್ಕಾಲಿಕ ಪಟ್ಟಿಗೆ ಸೇರಿದ ತಾಣಗಳಾದ ಛತ್ತೀಸ್ಗಡದ ಕಾಂಗಾರ್ ಕಣಿವೆ ರಾಷ್ಟ್ರೀಯ ಉದ್ಯಾನ, ತೆಲಂಗಾಣದ ಮುದುಮಲ್ ನಲ್ಲಿರುವ ಶಿಲಾಯುಗದ 'ಮೆನ್ 
ಹಿರ್ಸ್', ಮೌರ್ಯರು ಆಡಳಿತ ಅಶೋಕ ಶಾಸನ ತಾಣಗಳ ಸರಣಿ, ಚೌಸತ್ ಯೋಗಿನಿ ದೇವಾಲಯಗಳು ಸರಣಿ, ಉತ್ತರ ಭಾರತದ ಗುಪ್ತ ದೇವಾಲಯಗಳು ಹಾಗೂ ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶದ ಬುಂದೇಲರ ಅರಮನೆ-ಕೋಟೆಗಳು ಸೇರಿವೆ.

Post a Comment

0 Comments